Hello ಸ್ನೇಹಿತರೇ, ರಾಜ್ಯ ಸರ್ಕಾರ ಇತ್ತೀಚಿಗೆ ರೇಷನ್ ಕಾರ್ಡ್ (Ration Card) ಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಯ ಅನುಕೂಲವನ್ನು ಅನೇಕ ಜನರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅನರ್ಹರು ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಇನ್ನು ಇಂತಹ ವಂಚನೆಯನ್ನು ತಡೆಯಲು ಸರ್ಕಾರ ಈಗಾಗಲೇ ಸಾಕಷ್ಟು ಕ್ರಮವನ್ನು ಕೈಗೊಂಡಿದೆ.
![ration card e kyc online karnataka](https://malnadsiri.com/wp-content/uploads/2023/08/ration-card-e-kyc-online-karnataka-1024x576.jpg)
www.ahara.kar.nic.in ration card application status
ರೇಷನ್ ಕಾರ್ಡ್ ಇ- ಕೆವೈಸಿ ಕಡ್ಡಾಯ
ಆಹಾರ ಇಲಾಖೆ ಇದೀಗ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಪಡಿತರ ಚೀಟಿದಾರರು ಈ ಹೊಸ ನಿಯಮವನ್ನು ಪಾಲಿಸಬೇಕಿದೆ. ಪಡಿತರ ಚೀಟಿದಾರರು ಕಡ್ಡಾಯವಾಗಿ ಇ – ಕೆವೈಸಿ ಮಾಡಿಸಬೇಕಿದೆ. ಇ – ಕೆವೈಸಿ ಆಗದೆ ಇರುವ ರೇಷನ್ ಕಾರ್ಡ್ ಗಳ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ನಿಮ್ಮ ರೇಷನ್ ಕಾರ್ಡ್ ಗೆ ಇ- ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ನಲ್ಲಿನ ಇರುವ ನಿಮ್ಮ ಹೆಸರು ರದ್ದಾಗಲಿದೆ.
ನಾಳೆಯಿಂದ ಇಂತವರ BPL ರೇಷನ್ ಕಾರ್ಡ್ ರದ್ದು
ಆಹಾರ ಇಲಾಖೆ ನೀಡುರುವ ಮಾಹಿತಿಯ ಪ್ರಕಾರ, ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಹಾಗು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಸರ್ಕಾರ ನೀಡುತ್ತಿರುವ ಉಚಿತ ಅಕ್ಕಿಯ ಲಾಭವನ್ನು ಪಡೆಯಬಹದು. ಪಡಿತರ ಲಾಭದ ಜೊತೆಗೆ ಕಾಂಗ್ರೆಸ್ ಸರ್ಕಾರ ಐದು ಯೋಜನೆಗಳ ಲಾಭಗಳು ಈ ಇ – ಕೆವೈಸಿ ಅಗತ್ಯವಾಗಿದೆ. ಆಗಸ್ಟ್ 31 ರೇಷನ್ ಕಾರ್ಡ್ ಇ- ಕೆವೈಸಿ ಅಪ್ಡೇಟ್ ಗೆ ಕೊನೆಯ ದಿನಾಂಕವಾಗಿದೆ.
ಈ ದಿನಾಂಕದೊಳಗೆ ನಿಮ್ಮ ರೇಷನ್ ಕಾರ್ಡ್ ಇ- ಕೆವೈಸಿ ಆಗದಿದ್ದರೆ ರದ್ದಾಗುತ್ತದೆ. ಇನ್ನು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/Home/EServices ಗೆ ಭೇಟಿ ನೀಡುವ ಮೂಲಕ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು. ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಮುನ್ನ ನೀವು ರೇಷನ್ ಕಾರ್ಡ್ ಇ – ಕೆವೈಸಿ ಮಾಡುವುದು ಉತ್ತಮ.
BPL ಕಾರ್ಡ್ ಪಡೆಯಲು 6 ಮಾನದಂಡಗಳು
*ವೈಟ್ ಬೋರ್ಡ್ ಕಾರ್ ಹೊಂದಿರುವವರು ಅರ್ಹರಲ್ಲ.
*ವಾರ್ಷಿಕವಾಗಿ 1 .2 ಲಕ್ಷ ಆದಾಯ ಮೀರಿರಬಾರದು.
*3 ಹೆಕ್ಟೇರ್ ಗಿಂತ ಹೆಚ್ಚಿನಾ ಕ್ರಷಿ ಭೂಮಿಯನ್ನು ಹೊಂದಿದ್ದವರು ಅರ್ಜಿ ಸಲ್ಲಿಸುವಂತಿಲ್ಲ, ಹಾಗೂ ಈಗ ಇರುವ ರೇಷನ್ ಕಾರ್ಡ್ ರದ್ದಾಗಲಿದೆ.
*ಕುಟುಂಬದ ಸದ್ಯಸರಲ್ಲಿ ಯಾರು ಕೊಡ ಸರಕಾರಿ ನೌಕರಿಯನ್ನು ಹೊಂದಿರಬಾರದು.
*ನಗರ ಪ್ರದೇಶದಲ್ಲಿ 1000 ಸ್ಕ್ವಯರ್ ಪೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿರುವಂತಿಲ್ಲ.
*ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.