Sirsi Marikamba Temple | ಶಿರಸಿ ಮಾರಿಕಾಂಬಾ ದೇವಸ್ಥಾನ
ಶಿರಸಿ ; ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಮಾರಿಕಾಂಬಾ ದೇವಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಮಾರಿಗುಡಿಯ ಅರ್ಚಕ ವಿದ್ವಾನ್ ರಾಮಕೃಷ್ಣ ಭಟ್ ಕೇರೈಕೈ ಜಾತ್ರೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಮಾರ್ಚ್ ರಿಂದ ಸಂಪ್ರದಾಯದ ಪ್ರಕಾರ ಶಿರಸಿ ಮಾರಿಕಾಂಬ ಜಾತ್ರೆ ನಡೆಯಲಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಆದರೆ ಈ ಬಾರಿಯೂ ಕೋವಿಡ್ ನೆರಳಿನಲ್ಲಿ, ಕೋವಿಡ್ ಮಾರ್ಗಸೂಚಿಗಳ ಪಾಲನೆ ಅನ್ವಯ ಜಾತ್ರೆ ನಡೆಸಬೇಕಿದೆ.
ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿನ ಎರಡು ಆನೆಗಳ ಮೂರ್ತಿಯು ನಿಮ್ಮನ್ನು ದೇವಾಲಯದ ಒಳಗೆ ಆಹ್ವಾನಿಸುತ್ತದೆ. ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ. ಭಕ್ತರು ಈ ಪುರಾತನ ಕಥೆಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಬಹುದು. ಇನ್ನು ನೀವು ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ನೋಡಬಹುದು.
ಇನ್ನು ಓದಿ : ಫೆಬ್ರವರಿ 7 2023 ರಿಂದ ಐತಿಹಾಸಿಕ ಸಾಗರ ಮಾರಿಕಾಂಬಾ ಜಾತ್ರೆ | Sagara Marikamba Jatre
ಶಿರಸಿ ಮಾರಿಕಾಂಬಾ ದೇವಸ್ಥಾನದ ದರ್ಶನ ಸಮಯ
ಪ್ರತಿದಿನ ದೇವಾಲಯದ ತೆರೆಯುವ ಸಮಯ 06:00 AM
ದೈನಂದಿನ ದೇವಾಲಯದ ದರ್ಶನ ಸಮಯಗಳು 06:00 AM ನಿಂದ 21:00 PM
ದೈನಂದಿನ ದೇವಾಲಯದ ಮುಚ್ಚುವ ಸಮಯ 21:00
ಸೂಚನೆ:
1) ಹಬ್ಬಗಳು, ಸಾಂದರ್ಭಿಕ ಮತ್ತು ವಿಶೇಷ ದಿನಗಳಲ್ಲಿ ಶಿರಸಿ ಮಾರಿಕಾಂಬಾ ದೇವಸ್ಥಾನದ ದರ್ಶನದ ಸಮಯ ಬದಲಾಗಬಹುದು.
ದೇವಾಲಯದ ಪ್ರವೇಶ ದ್ವಾರ:
ಈ ಸಭಾಭವನವನ್ನು ನೀವು ಪ್ರವೇಶಿಸುತ್ತಿದ್ದಂತೆ ನಿಮ್ಮ ಮೈನವಿರೇಳಲು ಆರಂಭಿಸುತ್ತದೆ. ಯಾಕೆ ಗೊತ್ತಾ..? ಇಲ್ಲಿ ಕುಂತಿರುವವಳು ಬೇರಾರು ಅಲ್ಲ, ಆಕೆಯೇ ಇಲ್ಲಿನ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆ. ಈಕೆಯನ್ನು ನೋಡುತ್ತಿದ್ದಂತೆ ಜೀವನವೇ ಧನ್ಯ ಎನ್ನುವ ಭಾವನೆ ನಿಮ್ಮಲ್ಲಿ ಮೂಡತೊಡಗುತ್ತದೆ. ಭವ್ಯವಾದ ಸಭಾಂಗಣ (ಬಹುಶಃ ಇಂತಹ ವಿಶಾಲವಾದ ಸಭಾಂಗಣಗಳು ಕರ್ನಾಟಕದಲ್ಲಿ ಅಪರೂಪ) ಮತ್ತು ವಿಸ್ತಾರವಾದ ಜಗುಲಿಗಳು ಸ್ವತಃ ಶ್ರೀ ಮಾರಿಕಾಂಬೆಯ ಹಿರಿಮೆಯನ್ನು ಸಾರುತ್ತವೆ. ದೇವಾಲಯದ ಮುಂಭಾಗದ ತೆರೆದ ಜಾಗವನ್ನು ಶ್ರೀ ಮಹಾಗಣಪತಿ, ಈಶ್ವರ ಮತ್ತು ಹನುಮಂತನ ಸಣ್ಣ ದೇವಾಲಯಗಳು ಆಕ್ರಮಿಸಿಕೊಂಡಿವೆ. ಗಣಪತಿಯ ದೇವಾಲಯವನ್ನು ಆಧುನಿಕ ರೀತಿಯಲ್ಲಿ ಪುನರ್ನಿರ್ಮಿಸಲಾಗಿದೆ.
ಮಾರಿಕಾಂಬಾ ದೇವಿ:
ಕರ್ನಾಟಕದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಅಂದರೆ ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ. ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈಕೆಯನ್ನು ಭೇಟಿಯಾಗಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದರೆ ಖಂಡಿತವಾಗಿ ಎಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಅದೇನೋ ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.
ಗೋಕರ್ಣದಿಂದ ಪೂರ್ವಕ್ಕೆ 83 ಕಿಮೀ (51 ಮೈಲುಗಳು) ದೂರದಲ್ಲಿರುವ ಶ್ರೀ ಮಾರಿಕಾಂಬಾ ದೇವಾಲಯವನ್ನು ದೊಡ್ಡಮ್ಮ ದೇವಸ್ಥಾನ ಎಂದೂ ಕರೆಯಲಾಗುತ್ತದೆ, ಅಂದರೆ ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿ. ಶ್ರೀ ಮಾರಿಕಾಂಬಾ ದೇವಾಲಯವನ್ನು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
ಶ್ರೀ ಮಾರಿಕಾಂಬಾ ದೇವಸ್ಥಾನದ ಇತಿಹಾಸ:
ಹಾನಗಲ್ನಿಂದ ಶಿರಸಿಗೆ ದೇವಿಯ ವಿಗ್ರಹ ಬಂದಿತೆಂದು ಪುರಾಣಗಳು ಹೇಳುತ್ತವೆ. ಹಾನಗಲ್ನಲ್ಲಿ ಪ್ರಬಲ ಶಕ್ತಿ ಪೀಠಗಳಿವೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ವನವಾಸದಲ್ಲಿದ್ದ ಧರ್ಮರಾಯ ವಿರಾಟನಗರದ ಕಡೆಗೆ ಹೊರಟಿದ್ದ. ಅವರು ಗ್ರಾಮದ ಪ್ರವೇಶದ್ವಾರದಲ್ಲಿ ದುರ್ಗೆಯನ್ನು ನೋಡಿದರು. ಸಮಾಜದ ರಕ್ಷಣೆ, ದಯೆ ಮತ್ತು ಕಲ್ಯಾಣಕ್ಕಾಗಿ ಅವರು ಅಲ್ಲಿ ಆಕೆಯನ್ನು ಪೂಜಿಸಿದರು ಎನ್ನಲಾಗುತ್ತದೆ. ಹಾನಗಲ್ನ್ನು ಆ ಸಂದರ್ಭದಲ್ಲಿ ವಿರಾಟನಗರ ಎಂದು ಕರೆಯಲಾಗುತ್ತಿತ್ತು. ಇದನ್ನು ಚಾಲುಕ್ಯರ ಶಾಸನಗಳಲ್ಲಿ ‘ವಿರಾಟನ ಕೋಟೆ’ ಎಂದೂ ಉಲ್ಲೇಖಿಸಲಾಗಿದೆ. ಹಾನಗಲ್ ಮಹಾರಾಷ್ಟ್ರದ ವಿರಾಟನಗರ ಎಂದು ಸಂಶೋಧಕರೂ ದಾಖಲಿಸಿದ್ದಾರೆ. ಕುಂತಿ ದಿಬ್ಬ (ಕುಂತಿಯ ದಿಬ್ಬ) ಹಿಂದೆ ಶ್ರೀ ದೇವಿಯು ಕುಳಿತಿದ್ದ ತ್ರಿಭುವನೇಶ್ವರಿಯ ಸ್ಥಾನವಾಗಿತ್ತು ಎಂದು ವಿದ್ವಾಂಸರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಇಲ್ಲಿ ಶ್ರೀ ದೇವಿಯ ಜಾತ್ರೆಯು ಶ್ರದ್ಧೆ ಮತ್ತು ಭಕ್ತಿಯಿಂದ ನಡೆಯುತ್ತದೆ.
ಶಿರಸಿ ಮಾರಿಕಾಂಬಾ ಜಾತ್ರೆ
ಹಾನಗಲ್ ಜಾತ್ರಾ ಮಹೋತ್ಸವದ ನಂತರ ದೇವಿಯ ವಿಗ್ರಹವನ್ನ ಆಭರಣ ಸಮೇತ ಪೆಟ್ಟಿಗೆಯಲ್ಲಿ ಹಾಕಿಟ್ಟಿದ್ದರು. ಅದನ್ನ ಎತ್ತಿಕೊಂಡು ಹೋದ ಕಳ್ಳರು ಆಭರಣಗಳನ್ನೆತ್ತಿಕೊಂಡು ವಿಗ್ರಹವಿದ್ದ ಪೆಟ್ಟಿಗೆಯನ್ನ ಶಿರಸಿಯ ದೇವಿಕೆರೆಯಲ್ಲಿ ಹಾಕಿದರು. ಬಸವ ಎನ್ನುವ ಭಕ್ತನೊಬ್ಬ ಪ್ರತಿ ವರ್ಷ ಚಂದ್ರಗುತ್ತಿಯ ಜಾತ್ರೆಗೆ ಹೋಗುತ್ತಿದ್ದ. ಒಂದು ಬಾರಿ ಅವನನ್ನು ಜನರು ಪೀಡಿಸಿದರು. ಅದರಿಂದ ಬೇಸರಗೊಂಡ ಅವನು ಚಂದ್ರಗುತ್ತಿಯ ಜಾತ್ರೆಗೆ ಹೋಗದೆ ಶಿರಸಿಯಲ್ಲಿಯೇ ದೇವಿಯ ಆರಾಧನೆ ಮಾಡಿದನು.
ಒಂದು ರಾತ್ರಿ ದೇವಿ ಅವನಿಗೆ ಕನಸಿನಲ್ಲಿ “ನಾನು ನಿಮ್ಮ ಊರಿನ ಕೆರೆಯಲ್ಲಿದ್ದೇನೆ. ನನ್ನನ್ನು ಮೇಲೆತ್ತು” ಎಂದು ಹೇಳುತ್ತಾಳೆ. ಅದರಂತೆ ಪೆಟ್ಟಿಗೆಯಲ್ಲಿದ್ದ ದೇವಿಯ ಬಿಡಿಭಾಗಗಳನ್ನ ಸೇರಿಸಿ 1911 ರ ವೈಶಾಖ ಶುದ್ಧ ಅಷ್ಟಮಿಯ ಮಂಗಳವಾರ ದೇವಿಯ ಪ್ರತಿಷ್ಠಾಪನೆಯಾಯಿತು. ನಂತರ ಅದೇ ಜಾಗದಲ್ಲಿ ಭವ್ಯವಾದ ದೇವಾಲಯ ನಿರ್ಮಾಣವಾಯಿತು. ದೇವಿಯ ವಿಗ್ರಹ ಸಿಕ್ಕಿದ ಮೇಲೆ ಆ ಕೆರೆಗೆ ದೇವಿಕೆರೆ ಎಂದು ನಾಮಕರಣ ಮಾಡಲಾಯಿತು.
ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಥೆಯನ್ನು ಕೂಡ ಹೇಳಲಾಗಿದೆ. ಸುಂದರ ಬ್ರಾಹ್ಮಣ ಯುವತಿಯನ್ನು ಅನ್ಯ ಜಾತಿಯ ಯುವಕನೋರ್ವ ವಿವಾಹವಾಗುವ ಬಯಕೆಯಿಂದ ಮಾಂಸಾಹಾರವನ್ನು ತ್ಯಜಿಸಿ, ಬ್ರಾಹ್ಮಣರಂತೆ ಮಂತ್ರ, ಪೂಜೆಯನ್ನು ಕಲಿತು ಬ್ರಾಹ್ಮಣ ಮುಖವಾಡವನ್ನು ಹಾಕಿಕೊಂಡ. ಈತನನ್ನು ಶುದ್ಧ ಬ್ರಾಹ್ಮಣನೆಂದು ತಿಳಿದ ಆ ಸುಂದರ ಬ್ರಾಹ್ಮಣ ಯುವತಿಯು ಆತನನ್ನು ವಿವಾಹವಾಗುತ್ತಾಳೆ. ಆದರೆ, ಒಂದು ದಿನ ಅನ್ಯ ಜಾತಿಯ ಯುವಕನಿಗೆ ಮಾಂಸಾಹಾರವನ್ನು ಕಂಡು ತಿನ್ನಬೇಕೆಂದು ಆಸೆಯಾಗಿ ತಿನ್ನುತ್ತಾನೆ. ಇದನ್ನು ತಿಳಿದ ಆತನ ಬ್ರಾಹ್ಮಣ ಪತ್ನಿಯು ಆತನ ರುಂಡವನ್ನು ಕತ್ತರಿಸಿ, ಇಡೀ ಮನೆಗೆ ಬೆಂಕಿ ಹಚ್ಚಿ, ತಾನು ಕೂಡ ಪತಿಯೊಂದಿಗೆ ಬೆಂಕಿಯಲ್ಲಿ ಆಹುತಿಯಾಗುತ್ತಾಳೆ. ಈಕೆಯ ಧರ್ಮ ನಿಷ್ಠೆಯನ್ನು ನೋಡಿದ ಊರಿನವರು ಆಕೆಯನ್ನು ದುರ್ಗೆಯ ಅವತಾರ ಎಂದು ಪೂಜಿಸಲು ಆರಂಭಿಸಿದರೆನ್ನುವ ಕಥೆಯೂ ಇದೆ.
ಕೋಣ
ಶಿರಸಿ ಮಾರಿಕಾಂಬಾ ಜಾತ್ರೆ:
ಫಾಲ್ಗುಣ ಮಾಸದಲ್ಲಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಇದು ರಾಜ್ಯದ ಅತ್ಯಂತ ಪ್ರಸಿದ್ಧ ಮತ್ತು ದೊಡ್ಡ ಜಾತ್ರೆ ಎಂದು ಹೇಳಲಾಗುತ್ತದೆ. ರಾಜ್ಯದೆಲ್ಲೆಡೆಯಿಂದ ಭಕ್ತರು ಈ ಅದ್ಧೂರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಜಾತ್ರೆಯ ದಿನ ದೇವಿಯ ಮೂಲ ವಿಗ್ರಹಕ್ಕೆ ಸರ್ವಾಲಂಕಾರವನ್ನು ಮಾಡಿ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಹತ್ತಿರದ ಬಿಡ್ಕಿ ಮೈದಾನದಲ್ಲಿ ಸ್ಥಾಪಿಸಿ ಅಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ದೇವಿಗೆ ವಿವಾಹ ಮಾಡುವ ಸಂಪ್ರದಾಯದೊಂದಿಗೆ ಆರಂಬವಾದ ಜಾತ್ರೆಯು 9ನೇ ದಿನ ಕೋಣ ಬಲಿ ಕೊಟ್ಟು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ಬಲಿ ಕೊಡುವ ಕೋಣವು ಬ್ರಾಹ್ಮಣ ಮುಖವಾಡ ಧರಿಸಿ ಬ್ರಾಹ್ಮಣ ಯುವತಿಯನ್ನು ವಿವಾಹವಾದ ಯುವಕ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು. ಆದರೆ ಈಗ ಕೋಣ ಬಲಿಯನ್ನು ಇಲ್ಲಿ ನಿಷೇಧಿಸಲಾಗಿದ್ದು, ಕೋಣವನ್ನು ಬಲಿ ಕೊಡುವ ಬದಲು ಬೂದುಕುಂಬಳಕಾಯಿಯನ್ನು ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಜಾತ್ರಾ ಮಹೋತ್ಸವ ಮುಗಿದ 10 ದಿನಗಳವರೆಗೆ ಇಡೀ ಊರಿನವರಿಗೆ ಸೂತಕವಿರುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಯಾವುದೇ ಶುಭ ಕಾರ್ಯವನ್ನು ಆಯೋಜಿಸುವುದಿಲ್ಲ. ಈ ಅವಧಿಯಲ್ಲಿ ದೇವಿಯ ವಿಗ್ರಹವನ್ನು ದೇವಾಲಯದ ಹಿಂಭಾಗದಲ್ಲಿನ ಕೆರೆಯಲ್ಲಿ ಮುಳುಗಿಸಿಟ್ಟು, ದೇವಾಲಯದ ಬಾಗಿಲನ್ನು ಮುಚ್ಚು ಸಂಪ್ರದಾಯವಿದೆ. ನಂತರ ಯುಗಾದಿಯಂದು ಈ ದೇವಾಲಯದ ಬಾಗಿಲನ್ನು ಮತ್ತೆ ತೆರೆಯಲಾಗುತ್ತದೆ. ಮತ್ತು ಜಾತ್ರೆಯ ನಂತರ ಕೋಣವನ್ನು ಹರಾಜಿನಲ್ಲಿ ಮಾರಲಾಗುತ್ತದೆ. ಹಾಗೂ ದೇವಾಲಯದಲ್ಲಿ ಮತ್ತೆ ಎಂದಿನಂತೆ ಪೂಜೆ ಕಾರ್ಯಗಳು ನಡೆಯಲಾರಂಭಿಸುತ್ತದೆ. ಈ ಅದ್ಭುತ ಹಾಗೂ ಪವಿತ್ರ ದೇವಾಲಯಕ್ಕೆ ಒಮ್ಮೆಯಾದರೂ ನಾವು ಭೇಟಿಯಾಗಬೇಕಲ್ಲವೇ..?
ಶಿರಸಿ ಮಾರಿಕಾಂಬಾ ದೇವಸ್ಥಾನವನ್ನು ತಲುಪುವುದು ಹೇಗೆ | How to Reach Sirsi Marikamba Temple
ವಿಮಾನದಲ್ಲಿ:
ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಹುಬ್ಬಳ್ಳಿ ವಿಮಾನ ನಿಲ್ದಾಣ. ಶಿರಸಿ ಮಾರಿಕಾಂಬಾ ದೇವಸ್ಥಾನವು ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ 113 ಕಿಮೀ ದೂರದಲ್ಲಿದೆ. ಭಾರತದ ಎಲ್ಲಾ ಮೆಟ್ರೋ ನಗರಗಳಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಿಯಮಿತ ವಿಮಾನಗಳಿವೆ. ಅಗತ್ಯವಿರುವ ಗಮ್ಯಸ್ಥಾನದವರೆಗೆ ಖಾಸಗಿ ಟ್ಯಾಕ್ಸಿಗಳು ವಿಮಾನ ನಿಲ್ದಾಣದ ಹೊರಗೆ ಲಭ್ಯವಿದೆ.
ರೈಲು ಮೂಲಕ:
ತಾಳಗುಪ್ಪಾ ರೈಲು ನಿಲ್ದಾಣವು ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಹತ್ತಿರದ ರೈಲು ನಿಲ್ದಾಣವಾಗಿದೆ. ತಾಳಗುಪ್ಪಾ ರೈಲು ನಿಲ್ದಾಣದಿಂದ ಮಾರಿಕಾಂಬಾ ದೇವಸ್ಥಾನದ ನಡುವಿನ ಅಂತರವು 19 ಕಿಮೀ.
ರಸ್ತೆ ಮೂಲಕ:
ಭಕ್ತರು ರಸ್ತೆ ಮತ್ತು ಕಾರಿನ ಮೂಲಕವೂ ಮಾರಿಕಾಂಬಾ ದೇವಸ್ಥಾನವನ್ನು ತಲುಪಬಹುದು. ಬೆಂಗಳೂರು ಮತ್ತು ಮೈಸೂರಿನಿಂದ ದೇವಸ್ಥಾನಕ್ಕೆ ನೇರ ಬಸ್ಸುಗಳು ಲಭ್ಯವಿವೆ. KPSRTC ಕರ್ನಾಟಕದ ಇತರ ನಗರಗಳಿಂದ ಮಾರಿಕಾಂಬಾ ದೇವಸ್ಥಾನಕ್ಕೆ ಬಸ್ಸುಗಳನ್ನು ನಡೆಸುತ್ತದೆ.
It’s an awesome paragraph in favor of all the online people; they
will take advantage from it I am sure.
my web site porno
Thank u
Hi, the whole thing is going sound here and ofcourse every
one is sharing information, that’s truly fine, keep up
writing.
very informative articles or reviews at this time.
Nice post. I learn something totally new and challenging on websites
SPY4D situs judi slot online mudah menang
I love how you provide concrete and relevant examples in this article.
Your article is an excellent resource for anyone interested in this topic. I appreciate the way you presented the information in a clear and concise manner.