ವ್ಯವಹಾರವನ್ನು ಪ್ರಾರಂಭಿಸುವುದು ಅನೇಕರಿಗೆ ಕನಸು, ಆದರೆ ಪರಿಕಲ್ಪನೆಯಿಂದ ವಾಸ್ತವಕ್ಕೆ ಪ್ರಯಾಣಿಸಲು ಸಾಮಾನ್ಯವಾಗಿ ಹಣಕಾಸಿನ ಬೆಂಬಲ ಬೇಕಾಗುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಮುದ್ರಾ ಲೋನ್ ಎಂದೂ ಕರೆಯಲ್ಪಡುತ್ತದೆ, ಇದು ಭಾರತದಲ್ಲಿ ಸರ್ಕಾರದ ಉಪಕ್ರಮವಾಗಿದ್ದು, ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ವ್ಯಾಪಾರದ ಕನಸುಗಳನ್ನು ವಾಸ್ತವಕ್ಕೆ ತಿರುಗಿಸಲು ಅಧಿಕಾರ ನೀಡುತ್ತದೆ.

ಸ್ವಂತ ಉದ್ಯಮ ಆರಂಭಿಸಬೇಕು ಎಂದುಕೊಂಡವರಿಗೆ ಮೊದಲು ಎದುರಾಗುವ ಸವಾಲು ಬಂಡವಾಳದ್ದು. ಅದರಲ್ಲೂ ಬ್ಯಾಂಕ್ನಲ್ಲಿ ಸಾಲ ಪಡೆಯಲು ಹಲವಾರು ದಾಖಲೆಗಳನ್ನು ನೀಡಬೇಕಾಗುತ್ತದೆ. ಜೊತೆಗೆ ಹೆಚ್ಚಿನ ಬಡ್ಡಿ ಕೂಡ ಪಾವತಿಸಬೇಕಾಗುತ್ತದೆ. ಅಲ್ಲದೆ ಸಾಲ ಪಡೆಯಲು ಕೆಲವು ಅಡಮಾನಗಳನ್ನು ಸಹ ಇಡಬೇಕಾಗುತ್ತದೆ.
ಇಷ್ಟೆಲ್ಲ ಮಾಡಿಯೂ ಕಡಿಮೆ ಬಡ್ಡಿಗೆ ಸಾಲ ಸಿಗೋದು ಬಹುತೇಕ ಅನುಮಾನ.
ಇಂಥ ಪರಿಸ್ಥಿತಿಯಲ್ಲಿ ಸ್ವಂತ ಉದ್ಯಮದ ಕನಸು ಕಾಣುತ್ತಿರುವವರಿಗಾಗಿಯೇ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಸಹಕಾರಿ ಆಗಲಿದ್ದು,ಕಡಿಮೆ ಬಡ್ಡಿಯೊಂದಿಗೆ ಮತ್ತು ಅಪಾಯ ಮುಕ್ತ ಸಾಲವನ್ನು ನೀವು ಈ ಯೋಜನೆಯ ಮೂಲಕ ಪಡೆಯಬಹುದು. ಈ ಮೂಲಕ ನೀವು ಕೂಡ ಉದ್ಯಮಿಯಾಗಬಹುದು.
ಈ ಯೋಜನೆಯಡಿಯಲ್ಲಿ, ಕೇಂದ್ರ ಸರ್ಕಾರ ಯುವಕರಿಗೆ ತಮ್ಮ ಉದ್ಯೋಗ ಅಥವಾ ವ್ಯವಹಾರವನ್ನು ಪ್ರಾರಂಭಿಸಲು 50 ಸಾವಿರದಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡುತ್ತದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯು ಸರ್ಕಾರದ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದಾಗಿದೆ. ಹಾಗಾದರೆ ಈ ಸರ್ಕಾರದ ಯೋಜನೆ ಮತ್ತು ಈ ಯೋಜನೆಯ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ ಸಾಲವನ್ನು ನೀಡಲಾಗುತ್ತದೆ. ಉದ್ಯಮದ ಆರ್ಥಿಕ ಸ್ಥಿತಿಯನ್ನು ಗಮನಿಸಿ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ.
>> ಪ್ರಧಾನ ಮಂತ್ರಿ ಮುದ್ರಾ ಶಿಶು ಯೋಜನೆ
>> ಪ್ರಧಾನ ಮಂತ್ರಿ ಮುದ್ರಾ ಕಿಶೋರ್ ಯೋಜನೆ
>> ಪ್ರಧಾನ ಮಂತ್ರಿ ಮುದ್ರಾ ತರುಣ್ ಯೋಜನೆ
5 ಲಕ್ಷದಿಂದ 10 ಲಕ್ಷದವರೆಗೆ ಸಾಲ
ಪ್ರಧಾನಮಂತ್ರಿ ಮುದ್ರಾ ಶಿಶು ಯೋಜನೆಯಡಿ ಯುವಕರಿಗೆ 50 ಸಾವಿರ ರೂ.ವರೆಗೆ ಸಾಲ ನೀಡಲಾಗುತ್ತದೆ. ಪ್ರಧಾನಮಂತ್ರಿ ಮುದ್ರಾ ಕಿಶೋರ್ ಯೋಜನೆ ಅಡಿಯಲ್ಲಿ ಜನರು 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯುತ್ತಾರೆ. ಮತ್ತೊಂದೆಡೆ, ತರುಣ್ ಯೋಜನೆಯಲ್ಲಿ, ಸರ್ಕಾರವು ಜನರಿಗೆ ಉದ್ಯೋಗ ಪ್ರಾರಂಭಿಸಲು 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ನೀಡುತ್ತಿದೆ.
ಅರ್ಹತೆಗಳೇನು..?
24 ವರ್ಷದಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು ಆಧಾರ್ ಕಾರ್ಡ್, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಕೆವೈಸಿ ಪ್ರಮಾಣಪತ್ರ ಮತ್ತು ವೋಟರ್ ಐಡಿ ಮುಂತಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.
ಮುದ್ರಾ ಯೋಜನೆಯಡಿ ಸಾಲದ ಗ್ಯಾರಂಟಿಯನ್ನು ಮೈಕ್ರೋ ಯೂನಿಟ್ಗಳಿಗೆ ಕ್ರೆಡಿಟ್ ಗ್ಯಾರಂಟಿ ಅಡಿಯಲ್ಲಿ ನೀಡಲಾಗುತ್ತದೆ, ಇದನ್ನು ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಮೂಲಕ ನೀಡಲಾಗುತ್ತದೆ. ಗ್ಯಾರಂಟಿ ಕವರ್ 5 ವರ್ಷಗಳವರೆಗೆ ಲಭ್ಯವಿದೆ. ಆದ್ದರಿಂದ ಮುದ್ರಾ ಯೋಜನೆಯಡಿ ನೀಡಲಾದ ಸಾಲಗಳಿಗೆ ಗರಿಷ್ಠ ಅವಧಿ 60 ತಿಂಗಳುಗಳಾಗಿವೆ.
ಈ ದಾಖಲೆಗಳು ಅಗತ್ಯ
* ಗುರುತಿನ ಪ್ರಮಾಣಪತ್ರ
* ನಿವಾಸ ಪ್ರಮಾಣಪತ್ರ
* ಪಾಸ್ಪೋರ್ಟ್ ಗಾತ್ರದ ಫೋಟೋ
* ವ್ಯಾಪಾರ ಪ್ರಮಾಣಪತ್ರ
* ವ್ಯಾಪಾರ ವಿಳಾಸ ಪುರಾವೆ
* ಜಾತಿ ಪ್ರಮಾಣ ಪತ್ರ
ಮುದ್ರಾ ಲೋನ್ಗೆ ಅರ್ಜಿ ಸಲ್ಲಿಸುವುದು ಹೇಗೆ?
ಎಷ್ಟು ಬಡ್ಡಿ ವಿಧಿಸಲಾಗುವುದು?
ವಿವಿಧ ಬ್ಯಾಂಕ್ಗಳಲ್ಲಿ ಇದರ ಬಡ್ಡಿದರಗಳು ವಿಭಿನ್ನವಾಗಿರಬಹುದು. ವಿವಿಧ ಬ್ಯಾಂಕುಗಳು ಸಾಲದ ಮೇಲೆ ವಿವಿಧ ಬಡ್ಡಿ ದರಗಳನ್ನು ವಿಧಿಸಬಹುದು. ಹೆಚ್ಚಾಗಿ ಈ ಯೋಜನೆಯಡಿ ಬಡ್ಡಿ ದರವು ವಾರ್ಷಿಕ 10 ರಿಂದ 12 ಪ್ರತಿಶತವರೆಗೆ ಇರುತ್ತೆ.
ಮುದ್ರಾ ಲೋನ್ ಮರುಪಾವತಿ ಅವಧಿ ಎಷ್ಟು?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಪಡೆದ ಸಾಲವನ್ನು 3 ವರ್ಷದಿಂದ 5 ವರ್ಷಗಳ ಒಳಗೆ ಅಂದರೆ 36 ತಿಂಗಳಿಂದ 60 ತಿಂಗಳ ಒಳಗೆ ಮರುಪಾವತಿ ಮಾಡಬೇಕು. ವೈಯಕ್ತಿಕ ಸಾಲಗಾರನ ಆರ್ಥಿಕ ಸ್ಥಿತಿ, ಸಾಲದ ಮೊತ್ತ ಇತ್ಯಾದಿಗಳನ್ನು ನೋಡಿದ ನಂತರ ಇದನ್ನು ನಿರ್ಧರಿಸಲಾಗುತ್ತದೆ.