ಗಾಯದ ಮೇಲೆ ಬರೆ: ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಮತ್ತೆ ಬಿಗ್ ಶಾಕ್: ಅಕ್ಕಿ, ತೊಗರಿ, ಉದ್ದು ಸೇರಿ ದಿನಸಿ ಬೆಲೆ ಭಾರಿ ಹೆಚ್ಚಳ: ಗ್ರಾಹಕರು ಕಂಗಾಲು

Hello ಸ್ನೇಹಿತರೇ, ಕರ್ನಾಟಕಕ್ಕೆ ಮುಂಗಾರು (Monsoon) ಕಾಲಿಟ್ಟಿದ್ದರೂ, ಅಂದುಕೊಂಡಷ್ಟು ಮಳೆಯಾಗುತ್ತಿಲ್ಲ. ಇದರಿಂದ ರೈತ (Farmer) ಕಂಗಾಲ ಆಗಿದ್ದು, ತಾನು ಅಂದುಕೊಂಡಷ್ಟು ಇಳುವರಿ ಬಾರದೆ ನಷ್ಟ ಅನುಭವಿಸುತ್ತಿದ್ದಾನೆ. ಇದರಿಂದ ಮಾರುಕಟ್ಟೆಗೆ (Market) ಸಮರ್ಪಕವಾಗಿ ತರಕಾರಿ (Vegetables) ಬಾರದ ಹಿನ್ನೆಲೆ ಬೆಲೆಗಳು ಗಗನಕ್ಕೆ ಏರುತ್ತಿವೆ. ಈಗಾಗಲೆ ತರಕಾರಿ ಬೆಲೆ ದುಪ್ಪಟ್ಟಾಗಿದ್ದು, ಇದರ ಬೆನ್ನಲ್ಲೇ ದಿನಸಿ ಸಾಮಗ್ರಿಗಳ (Groceries) ಬೆಲೆ ಕೂಡ ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದರೇ ಈ ವಾರ ದಿನಸಿ ಸಾಮಗ್ರಿಗಳ ಬೆಲೆ 5 ರಿಂದ 10 ರುಪಾಯಿ ಏರಿಕೆಯಾಗಿದೆ. ಕಳೆದ ವಾರ ಕೆಜಿಗೆ 50 ರೂ ಇದ್ದ ಸ್ಟೀಮ್ ಹಾಗೂ ಸೋನೆ ಮುಸುರಿ ರಾ ರೈಸ್ ಈ ವಾರ 50 ರಿಂದ 60 ರೂ. ಆಗಿದೆ.

grocery items price hike in kannada

ರಾಜ್ಯದಲ್ಲಿ ದಿನಸಿ ಪದಾರ್ಥಗಳ ಬೆಲೆ ಗನಗನಕ್ಕೇರಿದೆ. ಅಕ್ಕಿ, ಹೆಸರು, ಉದ್ದು ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಹೆಚ್ಚಳವಾಗಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.

ಇನ್ನು ಓದಿ : ‘ಲ್ಯಾಪ್ ಟಾಪ್’ ಕೊಳ್ಳುವವರಿಗೆ ಸಿಹಿಸುದ್ದಿ : ಗೌರಿ-ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದ ಅಮೆಜಾನ್

ಮಳೆ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡನೇ ಸಲ ಬಿತ್ತಿದ ಬೆಳೆ ಕೂಡ ಹಾಳಾಗತೊಡಗಿದೆ.

ಈ ಬಾರಿ ಉತ್ಪಾದನೆ ಪ್ರಮಾಣ ಶೇಕಡ 40ರಷ್ಟು ಕುಸಿತ ಕಾಣುವ ಆತಂಕ ಇದೆ. ಪರಿಸ್ಥಿತಿಯ ಲಾಭ ಪಡೆದು ಕೆಲವೆಡೆ ಕೃತಕ ಆಭಾವ ಸೃಷ್ಟಿಸಿರುವ ಶಂಕೆ ವ್ಯಕ್ತವಾಗಿದೆ.

ಈ ಕಾರಣದಿಂದ ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆಯಾಗಿದೆ. ತೊಗರಿ ಬೇಳೆ ದರ ಕೆಜಿಗೆ 140 ರಿಂದ 180 ರೂ., ಹೆಸರುಬೇಳೆ 110 ರಿಂದ 120 ರೂ., ಉದ್ದಿನ ಬೇಳೆ 115 ರಿಂದ 130 ರೂ., ಕಡಲೆ 125 ರಿಂದ 132 ರೂ., ವಿವಿಧ ಅಕ್ಕಿದರ ಈಗ ಇರುವ ದರಕ್ಕಿಂತ 10 ರಿಂದ 20 ರೂ. ವರೆಗೆ ಹೆಚ್ಚಳವಾಗಿದೆ. ಬಹುತೇಕ ಎಲ್ಲಾ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

Join Telegram Group Join Now
WhatsApp Group Join Now

ದಿನಸಿ ಸಾಮಗ್ರಿಗಳ ಬೆಲೆ ಏರಿಕೆ
ಸಾಮಗ್ರಿಹಿಂದಿನ‌ ದರ (ರೂ.)ಈಗಿನ ದರ (ರೂ.)
ಅಕ್ಕಿ4060
ತೂರ್ ದಾಲ್96145 – 150
ಉದ್ದಿನಬೇಳೆ110140
ಮಸೂರ್‌ದಾಲ್7488
ಹೆಸರು ಬೇಳೆ95120
ಜೀರಾ350750
ಅರಿಶಿಣ ಪುಡಿ126307
ಚಿಲ್ಲಿ ಪೌಡರ್186425
ದನಿಯಾ ಪೌಡರ್150218
ಪೆಪ್ಪರ್380580
ಬ್ಯಾಡಗಿ ಮೆಣಸು330850
ಅವರೆಬೇಳೆ130190
ಅವರೆಕಾಳು110150
ಅಲಸಂದೆ ಕಾಳು70110
ಹುರುಳಿಕಾಳು6090
ಅವಲಕ್ಕಿ3548
ರಾಗಿ3038

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ