ತಮ್ಮ ಮನೆ ಮಾಲೀಕತ್ವದ ಕನಸನ್ನು ನನಸಾಗಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ಆಯ್ಕೆ ಮಾಡುವವರಿಗೆ ಒಂದು ಅದ್ಭುತ ಸಬ್ಸಿಡಿ ಕಾರ್ಯಕ್ರಮವನ್ನು ಘೋಷಿಸಿದೆ. ಈ ಉಪಕ್ರಮವು ವಸತಿಯಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಪ್ರಶಂಸಿಸಲ್ಪಟ್ಟಿದೆ, ಇದು ರಾಷ್ಟ್ರದಾದ್ಯಂತ ಅಸಂಖ್ಯಾತ ಮಹತ್ವಾಕಾಂಕ್ಷಿ ಮನೆಮಾಲೀಕರಿಗೆ ಸ್ವಾಗತಾರ್ಹ ಸುದ್ದಿಯಾಗಿದೆ.
![Those who build their own houses will get subsidy from the centre.](https://malnadsiri.com/wp-content/uploads/2024/03/Those-who-build-their-own-houses-will-get-subsidy-from-the-centre-1024x576.jpg)
ಈ ಹೊಸ ಸಬ್ಸಿಡಿ ಯೋಜನೆಯಡಿಯಲ್ಲಿ, ತಮ್ಮ ಸ್ವಂತ ಮನೆಗಳ ನಿರ್ಮಾಣವನ್ನು ಕೈಗೊಳ್ಳುವ ವ್ಯಕ್ತಿಗಳು ಸರ್ಕಾರದಿಂದ ಹಣಕಾಸಿನ ನೆರವು ಪಡೆಯಲು ಅರ್ಹರಾಗಿರುತ್ತಾರೆ. ಮನೆ ನಿರ್ಮಿಸಲು ಸಂಬಂಧಿಸಿದ ಆರ್ಥಿಕ ಹೊರೆಯನ್ನು ನಿವಾರಿಸಲು ಮತ್ತು ಜನಸಂಖ್ಯೆಯ ವ್ಯಾಪಕ ವರ್ಗಕ್ಕೆ ಮನೆಮಾಲೀಕತ್ವವನ್ನು ಹೆಚ್ಚು ಪ್ರವೇಶಿಸಲು ಸಹಾಯಧನವನ್ನು ವಿನ್ಯಾಸಗೊಳಿಸಲಾಗಿದೆ.
ದೇಶದಲ್ಲಿ ಈಗಾಗಲೇ ಬಡ ಜನತೆಗಾಗಿ Pradhan Mantri Awas ಯೋಜನೆ ಚಾಲ್ತಿಯಲ್ಲಿದೆ. ದೇಶದ ಲಕ್ಷಾಂತರ ಜನರು PMAY ಅಡಿಯಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣದ ಕನಸನ್ನು ನನಸಾಗಿಸಿಕೊಂಡಿದ್ದಾರೆ ಎನ್ನಬಹುದು.
ಕೇಂದ್ರ ಸರ್ಕಾರ ದೇಶದ ನಿರ್ಗತಿಕರಿಗಾಗಿ ಆರ್ಥಿಕವಾಗಿ ನೆರವಾಗಲು ಒಂದೊಂದೇ ಯೋಜನೆಯನ್ನು ಪರಿಚಯಿಸುತ್ತ ಬಡವರು ಆರ್ಥಿಕವಾಗಿ ಸ್ಥಿರತೆ ಕಾಣಲು ಸಹಾಯ ಮಾಡುತ್ತಿದೆ. ಇದೀಗ ಬಡ ಜನರಿಗೆ ಮನೆಯನ್ನು ಕಟ್ಟಿಕೊಳ್ಳಲು ಸಹಾಯವಾಗಲು ಹೊಸ ಯೋಜನೆಯನ್ನು ಸರ್ಕಾರ ಪರಿಚಯಿಸಿದೆ. ಈ ಹೊಸ ಯೋಜನೆಯಡಿ ಸಬ್ಸಿಡಿ ರೂಪದಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಸ್ವಂತ ಮನೆ ಕಟ್ಟುವವರಿಗೆ ಕೇಂದ್ರದಿಂದ ಸಿಗಲಿದೆ ಸಬ್ಸಿಡಿ
ಸ್ವಂತ ಮನೆ ನಿರ್ಮಾಣದ ಕನಸು ಅದೆಷ್ಟೋ ಮದ್ಯವ ವರ್ಗದ ಜನರಿಗೆ ಕನಸಾಗಿಯೇ ಉಳಿದಿದೆ ಎನ್ನಬಹುದು. ಈಗಂತೂ ಆಸ್ತಿ ದರಗಳು ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಹೊಸ ಮನೆ ಖರೀದಿ ಹಾಗೂ ನಿರ್ಮಾಣದ ದೂರದ ಮಾತಾಗಿದೆ.
ಸದ್ಯ ಕೇಂದ್ರ ಸರ್ಕಾರ ಮಧ್ಯಮ ವರ್ಗದ ಜನರ ಮನೆ ನಿರ್ಮಾಣದ ಕನಸಿಗೆ ಸಹಾಯವಾಗಲು ಹೊಸ ಯೋಜನೆಯನ್ನು ಪರಿಚಯಿಸುವ ನಿರ್ಧಾರ ಕೈಗೊಂಡಿದೆ. ಸಣ್ಣ ನಗರ ವಸತಿ ವಲಯಕ್ಕೆ ಅಗ್ಗದ ಸಾಲ ನೀಡಲು 600 ಮಿಲಿಯನ್ (60,000 ಕೋಟಿ) ಖರ್ಚು ಮಾಡುವ ಯೋಜನೆಯಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಬಡವರೇ ನಿಮಗಾಗಿ ಸ್ವಂತ ಮನೆಯನ್ನು ಕಟ್ಟಿಕೊಳ್ಳಿ
ಫೆ. 1 ರಂದು ಘೋಷಣೆಯಾಗಿರುವ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಬಡವರಿಗಾಗಿ ವಸತಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದೆ. ಲೋಕಸಭಾ ಚುನಾವಣೆಯ ದಿನಾಂಕ ನಿಗದಿಗೂ ಮುನ್ನ ಮೋದಿ ಸರ್ಕಾರ ವಸತಿ ಯೋಜನೆಯ ಬಗ್ಗೆ ಘೋಷಣೆ ಹೊರಡಿಸಲಿದೆ.
ಗ್ರಾಮೀಣ ಪ್ರದೇಶದಲ್ಲಿನ ಜನರು ಸ್ವಂತ ಮನೆಯಿಲ್ಲದೆ ಬೀದಿಗಳಲ್ಲಿ, ಗುಡಿಸಿಲಿನಲ್ಲಿ ವಾಸಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ಯೋಜನೆಯ ಜಾರಿಗೆ ಮುಂದಾಗಿದೆ. ದೇಶದ ಬಡ ಜನತೆಗೆ ವಸತಿಯನ್ನು ಕಲ್ಪಿಸಿಕೊಡಲು ಕೋಟ್ಯಂತರ ಹಣವನ್ನು ಮೀಸಲಿಟ್ಟಿದೆ. ದೇಶದ ಬಡ ಜನರು ವಸತಿ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದಾಗಿದೆ.