Hello ಸ್ನೇಹಿತರೇ , ಭಾರತೀಯ ಪ್ರತಿ ಪ್ರಜೆಗೂ ಕೂಡ Aadhaar Card ಮುಖ್ಯ ದಾಖಲೆಯಾಗಿದೆ. 5 ವರ್ಷದ ಮಗುವಿನದಿಂದ ಪ್ರತಿ ಯೊಬ್ಬರು ಕೂಡ ಆಧಾರ್ ಧ್ರಡೀಕರಣವನ್ನು ಮಾಡಿಸಿಕೊಳ್ಳಲೇ ಬೇಕಿದೆ.

ಇತ್ತೀಚಿಗೆ ಇನ್ನಿತರ ವೈಯಕ್ತಿಕ ದಾಖಲೆಗಳ ಜೊತೆಗೆ ಆಧಾರ್ ಅನ್ನು ಲಿಂಕ್ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಯೋಜನೆಗಳ ಲಾಭವನ್ನು ಪಡೆಯಲು Aadhar Card ಅಗತ್ಯವಾಗಿ ಬೇಕಾಗಿದೆ. ಸದ್ಯ Aadhaar ಮಾಹಿತಿ ಇಲ್ಲದೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ ಎಂದು ಹೇಳಿದರೆ ತಪ್ಪಾಗಾಲಾರದು.
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಇನ್ನು Aadhaar ನಲ್ಲಿ ವ್ಯಕ್ತಿಯಾ ಎಲ್ಲ ವೈಯಕ್ತಿಯ ಮಾಹಿತಿಗಳು ಇರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. Aadhaar ನಲ್ಲಿ ಎಲ್ಲ ಆದಾಯದ ಮೂಲ ವಿವರಗಳು ಇರುತ್ತದೆ. Moody’s Investors Service ಇತ್ತೀಚಿಗೆ ಭಾರತದಲ್ಲಿ ಆಧಾರ್ ವ್ಯವಸ್ಥೆಯ ಸುರಕ್ಷತೆ ಮತ್ತು ಗೌಪ್ಯತೆ ದೋಷಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿತ್ತು. ಸದ್ಯ ಕೇಂದ್ರ ಸರ್ಕಾರ Moody’s Investors Service ಕೇಳಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದೆ.
ಇನ್ನು ಓದಿ : ಕಾವೇರಿ ಜಲವಿವಾದ: ಒಂದೇ ವಾರದಲ್ಲಿ ಎರಡು ಬಂದ್ಗಳು- ಬೆಂಗಳೂರಿಗೆ ತಟ್ಟಲಿದೆ ಬಿಸಿ
ಆಧಾರ್ ವಿಶ್ವದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಧಾರ್ “ವಿಶ್ವದ ಅತ್ಯಂತಾ ವಿಶ್ವಾಸಾರ್ಹಾ ಡಿಜಿಟಲ್ ಐಡಿ” ಎಂದು ಹೇಳಿದೆ. ಇನ್ನು ಮೋಡಿಸ್ ವರದಿಯಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಆಧಾರ್ ವ್ಯವಸ್ಥೆಯು ಸಾಮಾನ್ಯವಾಗಿ ಸೇವೆ ನಿರಾಕರಣೆಗಳಿಗೆ ಕಾರಾಣವಾಗುತ್ತದೆ ಎಂದು ಹೇಳಿದೆ. ಬಿಸಿ, ಆದ್ರಾ ವಾತಾವರಣದಲ್ಲಿ ಕೈಯಿಂದ ಕೆಲಸ ಮಾಡುವವರಿಗೆ ಬಯೋಮೆಟ್ರಿಕ್ ತಂತ್ರಜ್ಞಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಎಂದು ಮೋಡಿಸ್ ಹೇಳಿದೆ.
ಇನ್ನು ಓದಿ : ಮಳೆಯಿಲ್ಲದೆ ಕಂಗೆಟ್ಟ ಎಲ್ಲಾ ರೈತರಿಗೆ ಸಿಹಿಸುದ್ದಿ, ಸರ್ಕಾರದ ಮಹತ್ವದ ನಿರ್ಧಾರ
ಇನ್ನುಮುಂದೆ ಬಯೋಮೆಟ್ರಿಕ್ ಧ್ರಡೀಕರಣ ಅಗತ್ಯವಿಲ್ಲ
ಸದ್ಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (MGNREGS) ಬಯೋಮೆಟ್ರಿಕ್ ಬಳಸಿಕೊಂಡು ಧ್ರಡೀಕರಿಸುವ ಅಗತ್ಯ ಇಲ್ಲ ಎಂದು ಹೇಳಲಾಗಿದೆ. MGNREGS ಯೋಜನೆಯಡಿ ಕಾರ್ಮಿಕರಿಗೆ ಪಾವತಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದೆ. ಆಧಾರ್ ವ್ಯವಸ್ಥೆಯಲ್ಲಿ ಗೌಪ್ಯತೆಯ ರಕ್ಷಣೆಗಾಗಿ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.